ತೆಂಗಿನ ಸಮಗ್ರ ಪೋಷಕಾಂಶಗಳ ನಿರ್ವಹಣೆ
loading...
ತೆಂಗನ್ನು ತಮಿಳುನಾಡು,ಕೇರಳ , ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ನಾವು ಇಂದು ಈ ಬಹು ಉಪಯೋಗಿ ತೆಂಗಿನ ಕುರಿತಾಗಿ,ಅದರ ಸಮಗ್ರ ನಿರ್ವಹಣೆಯ ಕುರಿತಾಗಿ ಹಂತ ಹಂತವಾಗಿ ತಿಳಿದುಕೊಳ್ಳೋಣ .
- ತೆಂಗಿನ ಮರಗಳಿಗೆ ಸೆಪ್ಟೆಂಬರ್-ಅಕ್ಟೊಬರ್ ತಿಂಗಳಲ್ಲಿ ಮರದಿಂದ ಒಂದೂವರೆ ಅಡಿ ಬಿಟ್ಟು ಐದು ಅಡಿಗಳವರೆಗೆ ಮಣ್ಣನ್ನು ಸಡಿಲ ಮಾಡುವುದು ಅಗತ್ಯವಾಗಿದೆ.
- ತೆಂಗಿನ ಗಿಡಗಳಿಗೆ ಸಾರಜನಕ ಗೊಬ್ಬರಗಳನ್ನು ವರ್ಷಕ್ಕೆ ಎರಡು ಬಾರಿ ಒಂದೊಂದು ಕೆ.ಜಿ.ಯಂತೆ ಮುಂಗಾರಿಗೆ ಮುನ್ನ ಮತ್ತು ಸೆಪ್ಟೆಂಬರ್-ಅಕ್ಟೊಬರ್ ತಿಂಗಳಲ್ಲಿ ಕೊಡಬೇಕು.
- ಪೊಟ್ಯಾಷ್ ಅಂಶವಿರುವ ಗೊಬ್ಬರಗಳನ್ನು ಮುಂಗಾರು ಮತ್ತು ಸೆಪ್ಟೆಂಬರ್-ಅಕ್ಟೊಬರ್ ತಿಂಗಳಲ್ಲಿ 600ಗ್ರಾಂ. ನಂತೆ ಕೊಡಬೇಕು.
- ರಂಜಾಕ, ಡಿ.ಎ.ಪಿ.- 800 ಗ್ರಾಂ. ಪ್ರತಿ ಗಿಡಕ್ಕೆ ಅಥವಾ ಸೂಪರ್ ಪಾಸ್ಪೇಟ್ 1.5 ಗ್ರಾಂ. ನ್ನು ಎರಡು ಸಮ ಕಂತುಗಳಲ್ಲಿ ನೀಡಬೇಕು.
- ರಂಜಕ ಕರಗಿಸುವ ಜೀವಾಣು ಪಿ.ಎಸ.ಬಿ. ಮತ್ತು ಜೈವಿಕ ಪೀಡೆನಾಶಕ ಸುಡೋಮೋನಾಸ್ ಅಥವಾ ಟ್ರೈಕೋಡರ್ಮಾ ಗಳನ್ನೂ ಕಾಂಪೋಸ್ಟ್ ನೊಂದಿಗೆ ಮಿಶ್ರಮಾಡಿ ಕೊಡಬೇಕು.
- ಲಘು ಪೋಷಕಾಂಶ ಗಳ ನಿರ್ವಹಣೆ ಅತ್ಯವಶ್ಯಕ, ಬೋರಾನ್ ಮತ್ತು ಸತುವಿನ ಕೊರತೆಯಿಂದ ತೆಂಗಿನ ಹೂವುಗಳು ಮತ್ತು ಚಿಕ್ಕ ಕಾಯಿಗಳು ಉದುರುತ್ತವೆ.
- ಸತು 150 ಗ್ರಾಂ. ಮತ್ತು ಬೋರಾಕ್ಸ್ 50ಗ್ರಾಂ.ನ್ನು ಮೀರಿ ಬಳಸುವುದರಿಂದ ಮಾನವನ ಮೇಲೆ ದುಷ್ಪರಿಣಾಮ ಬೀರುತ್ತವೆ.
- ಲಘು ಪೋಷಕಾಂಶ ಮತ್ತು ಜೈವಿಕ ಗೊಬ್ಬರಗಳನ್ನು ಕಾಂಪೋಸ್ಟ್ ಅಥವಾ ಕೊಟ್ಟಿಗೆ ಗೊಬ್ಬರಗಳ ಜೊತೆಗೆ ಮಿಶ್ರಮಾಡಿ ಕೊಡಬೇಕು.
- ರಾಸಾಯನಿಕ ಗೊಬ್ಬರಗಳನ್ನು ನೀಡಿದ ಮೇಲೆ ತೇವಾಂಶವನ್ನು ಕಾಪಾಡುವುದು ಅವಶ್ಯಕ.
- ತೆಂಗಿನ ಗರಿಗಳನ್ನು ತೆಂಗಿನ ಮರಗಳ ಬುಡದಲ್ಲಿ ಹಾಕುವುದು ಉತ್ತಮ,ಗರಿಗಳಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಷ್ ಅಂಶವಿರುತ್ತವೆ.
ಈ ಮೇಲಿನ ಎಲ್ಲ ಅಂಶಗಳನ್ನು ಅನುಸರಿಸುವುದರಿಂದ ಮತ್ತು ನಿಯಮಿತವಾಗಿ ನೀರನ್ನು ನೀಡುವುದರಿಂದ ರೈತರು ಹೆಚ್ಚಿನ ಇಳುವರಿಯನ್ನು ಪಡೆಯಬಹುದಾಗಿದೆ. ಆ ಮೂಲಕ ನಮ್ಮ ರೈತರು ಸದ್ರಡರಾಗಬೇಕೆಂಬುದೆ ನಮ್ಮ ಆಶಯ.
ಓದಿರಿ : ಜಾನುವಾರುಗಳಲ್ಲಿ ಕಾಲು ಬಾಯಿ ರೋಗ...
ಇಂತಹ ಇನ್ನು ವಿವಿಧ ಮಾಹಿತಿಗಾಗಿ ನಮ್ಮ ಸೈಟನ್ನು ಫಾಲೋ ಮಾಡಿ... ಮತ್ತು ಪೋಸ್ಟ್ ಹಾಕಿದಾಗ ನೋಟಿಫಿಕೇಶನ್ ಪಡೆಯಲು Subscribe ಮಾಡಿ.....
No comments